
ಬುಧವಾರ, ಮೇ 26, 2010
ಮನಸು ಮನಸ್ಸುಗಳ ಪಿಸುಮಾತು...

ಮಂಗಳವಾರ, ಮೇ 11, 2010
ಮಾತಿಗೆ ಸಿಗದ , ಅರ್ಥದಲಿ ವಿವರಿಸಲಾಗದ, ಒಲುಮೆಯ ಪ್ರತಿ ರೂಪ , ಬಾಳಿಗೆ ದಾರಿ ದೀಪ "ಅಮ್ಮ"

ನಿನ್ನ ಮಡಿಲಲಿ ಮಲಗಿಸಿ ಬೆಳೆಸಿದೆ ತುಂಬಿ ಮಮತೆಯ ಆನಂದ
ನಾ ಹೇಗೆ ತೀರಿಸಲಿ ನಿನ್ನ ಋಣವ ನಿನ್ನ ಪ್ರೀತಿಯೇ ಬಲುಚೆಂದ
ನವಮಾಸ ನರಳಿದರು ನೀ ನೀಡಲಿಲ್ಲ ತುಸು ನೋವು ಎಂದಿಗೂ..
ಹುಸಿಯಾಗದು ನಿನ್ನ ಪ್ರೀತಿ ಬಣ್ಣಿಸಲಾಗದು ಅದರ ರೀತಿ...
ಮಗುವಿಗಿಲ್ಲ ನಿನ್ನಿಂದ ಬೀತಿ ಸುರಿಸುವೆ ಸ್ವಾರ್ಥವಿಲ್ಲದ ಪ್ರೀತಿ...
ನೀನಿಲ್ಲದೆ ತವರಿಲ್ಲ ನೀ ಮರೆಯಾದರೆ ಕೊನೆಗೊಳ್ಳುವುದು ತವರಿನ ಋಣ...
ದಯಮಾಡಿ ತೊರೆಯದಿರು ನನ್ನ ತುಂಬಿ ಧುಕ್ಕದ ಧಾರುಣ...
ನೀ ನೋವುಂಡರು ನಿನ್ನ ಕರುಳ ಬಳ್ಳಿಯಲ್ಲಿ ಮಾಡಿದೆ ನನ್ನನ್ನು ಜೋಪಾನ...
ಕಣ್ಣಿಗೆ ಕಾಣದ ದೇವರು ಶೃಷ್ಟಿಸಿದ ನಿನ್ನನು ಸಲ್ಲಿಸುವೆ ಅವನಿಗೆ ನನ್ನ ನಮನ...
ಸೋಮವಾರ, ಮೇ 10, 2010
ಚಂಚಲ ಮನಸಿಗೆ ಬೇಲಿಯನು ಹಾಕಲು ಸಾಧ್ಯವಾಗುವುದೇ ?

ಮನದ ಮಾತುಗಳ ಪದಗಳಲಿ ನುಡಿಯ ಬಹುದೇ
ಅರಳಿದ ಪ್ರೀತಿಯ ಬಂಧಿಸಿ ಇಡಲಾಗುವುದೇ
ನಿಸ್ವಾರ್ಥ ಸ್ನೇಹವನು ಅನುಮಾನದಿ ನೋಡಲಾಗುವುದೆ
ಚಂಚಲ ಮನಸಿಗೆ ಬೇಲಿಯನು ಹಾಕಲು ಸಾಧ್ಯವಾಗುವುದೇ ?
ಒಂದು ಪುಟ್ಟ ನಗು ಯಾರ ಹೃದಯವನು ಕದಿಯುವುದೋ
ಬಲ್ಲವರು ಯಾರು ಮನದಲಿ ಮೂಡಿದ ಭಾವನೆಗೆ ಅರ್ಥವನು ನೀಡುವವರು ಯಾರು
ಮನದ ಮನೆಯ ಕದವದು ತೆರೆದಿದೆ , ಅದರ ಒಡೆಯರು ಎಂದು ...
ಬಂದಾರು ಕಾಯುತ ನಿಂತಿದೆ ಮುಗ್ದ ಹೃದಯ ಅದರ ದೀಪವ ಬೆಳಗುವವರು ಯಾರು ?
ಒಂದು ಕ್ಷಣ ಇರುವ ಹಾಗೆ ಇರುವುದಿಲ್ಲ ಮನ ಕಾರಣ ಅರಿವಿಲ್ಲ
ನಿನ್ನ ಕಂಡ ಕ್ಷಣ ಏಕೆ ನನ್ನ ನಾ ಮರೆತೇನೋ ಗೊತ್ತಿಲ್ಲ ಆದರೆ ಒಂದಂತು ಸತ್ಯ ,
ನೀನಿಲ್ಲದೆ ನನಗೆ ಜೀವನವಿಲ್ಲ ನೀನಿಲ್ಲದೆ ಹೋದರೆ ನನ್ನ ಬದುಕಿಗೆ ಅರ್ಥವಿಲ್ಲ !
ಏನೆಲ್ಲಾ ಬರೆಯುತ್ತೇವೆ ನಾವು ಪ್ರೀತಿ - ಸ್ನೇಹದ ಅರಿವಿಲ್ಲ
ನಿರ್ಮಲ ಸ್ನೇಹವನೆ ಅನುಮಾನದಲಿ
ನೋಡುವೆವಲ್ಲ ಸ್ನೇಹ ಪ್ರೀತಿಯ ಅರ್ಥವನೆ ಕೆಡಿಸುವೆವಲ್ಲ
ಎರಡೂ ಬೇರೆ ಎಂದುಕೊಂಡು ಯಾಕೆ ಜೊತೆಯಾಗಿ ನಡೆಯುವುದಿಲ್ಲ !
ಈ ನನ್ನ ಪ್ರಶ್ನೆಗೆ ನಿಮ್ಮಲಿ ಉತ್ತರವಿರಬಹುದೇ ನನಗೆ ತಿಳಿದಿಲ್ಲ
ಮನವೇಕೊ ಇಂದೂ ಭಾವನೆಗಳಲಿ ತೇಲಿ ಹೋಗಿದೆಯಲ್ಲ
ನನ್ನ ಭಾವನೆಗೆ ಸ್ಪಂದಿಸುವ ಜೀವ ಬೇಕಿದೆಯಲ್ಲ
ಆ ಸ್ನೇಹದ ಹಾದಿಯಲಿ ನೀವು ಜೊತೆಯಾಗಿ ಬರುವಿರಲ್ಲ !
ಸಾಗರದ ಒಡಲು ಬರಿದಾಗಿದೆ ನಿನ್ನ ನಗುವ ಅಲೆಯ ಕಾಣದೆ
ಹಗಲುಗನಸಿನಲಿ ಗಾಳಿಗೊಪುರದಲಿ ಕುಳಿತೆನಾ ಬಳಿದೆನಾ ಹೊಳಪು... ನಾಳೆ ಎಂಬುದಕೆ ಹಿಂದು ಮುಂದು ಇಲ್ಲ ಜೊತೆಗೇಕೆ ಬೆಂಬಿಡದ ನೆನಪು...

ಯಾರನ್ನು ದೂರೋದು ಯಾರದು ತಪ್ಪಿಲ್ಲ
ಯಾರಿಗೆ ಯಾರೋ ಆ ಬ್ರಹ್ಮ ಬರೆದ ಅದರ ಅರಿವಿಲ್ಲ
ಹುಚ್ಚು ಪ್ರೀತಿಯ ನಂಬಿ ಮನ ಓಡಿದೆಯಲ್ಲ
ಭ್ರಮೆಯ ಲೋಕದಲಿ ಮನ ಕನಸ ಕಾಣತೊಡಗಿದೆಯಲ್ಲ !
ಏನೆಂದು ಬರೆಯಲಿ ಹೇಳು ನಾ ನಿನ್ನ ಮನವ ಅರಿಯೆನು
ಯಾವ ರೀತಿ ಓದಲಿ ಕಾಣದಂತ ಸಾಲನು
ಏನೆಂದು ಬಣ್ಣಿಸಲಿ ಹೇಳು ನಿನ್ನ ಪ್ರೀತಿಯನು
ನಂಬಿಕೆಯಲಿ ನಾ ದಿನ ಕಳೆಯುತಿರುವೆನು !
ಈ ಬಾಳ ಹಾದಿಲಿ ಯಾರು ಯಾರ ಜೊತೆಗೋ ಅರಿವಿಲ್ಲ
ನಮ್ಮ ಜೊತೆಗೆ ಅವರೆಂದು ನಂಬಿ ಕೊಂಡಿದ್ದೆವಲ್ಲ
ಜೊತೆ ಸಿಗದಾಗ ಮನ ಬೇಸರದಿ ನೊಂದಿ ನಿಂತಿತಲ್ಲ
ನಮ್ಮ ಹುಚ್ಚುತನವ ಅರಿಯದೆ ಅವರನು ದೂರ ತೊಡಗಿದೆಯಲ್ಲ !
ನಮಗೆ ಯಾರೆಂದು ಬ್ರಹ್ಮ ಬರೆದಿರುವ ಅರಿವಿಲ್ಲ
ಮೆಚ್ಚಿಕೊಂಡವರ ನಮ್ಮವರೆಂದು ಕೊಂಡೆವಲ್ಲ ಅವರ ಹಚ್ಚಿಕೊಂಡು ಕುಳಿತೆವಲ್ಲ !
ಮನದಿ ಬೇರೆ ಯಾರ ಚಿತ್ರ ಕಾಣದಲ್ಲ
ಸಿಗುವುದಿಲ್ಲ ಎಂದಾಗ ಮನ ಸುಮ್ಮನೆ ಅವರ ದೂರಿತಲ್ಲ
ಈ ಬಾಳದಾರಿಲಿ ಯಾರಿಗೆ ಯಾರಿಲ್ಲ ,
ಯಾರನ್ನು ದೂರೋದು ಯಾರದು ತಪ್ಪಿಲ್ಲ....